
8th June 2025
ಮುಧೋಳ : ಆರ್.ಸಿ.ಬಿ. ಐಪಿಎಲ್ ಟ್ರೋಫಿ ಪಡೆದ ಸಂದರ್ಭದಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳತಕ್ಕೆ ಸಿಕ್ಕು 11 ಜನ ಅಮಾಯಕರು ಮರಣ ಹೊಂದಿರುವ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಧುರೀಣರಾದ ಅರುಣ ಗೋವಿಂದ ಕಾರಜೋಳ ಒತ್ತಾಯಿಸಿದರು.
ಕಾಲ್ತುಳಿತ ಘಟನೆ ನಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ ಅವರಾಲಿ, ಆರ್.ಸಿ.ಬಿ., ಕೆಎಸ್ ಸಿಎ, ಮಂತ್ರಿಮಂಡಲವಾಗಲಿ, ಅಧಿಕಾರಿಗಳಾಗಲಿ ಯಾರೂ ಕಾರಣರಲ್ಲ. ಮುಖ್ಯಮಂತ್ರಿ ಸಿದ್ಧರಮಯ್ಯನವರ ಮೊಮ್ಮಗನ ಆಸೆ ತೀರಿಸುವುದಕ್ಕೋಸ್ಕರ ಕೈಗೊಂಡ ದುಡುಕಿನ ನಿರ್ಧಾರದಿಂದಾಗಿ ಈ ಘಟನೆ ನಡೆದಿದ್ದು, ಇದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆಗಾರರಾಗಿದ್ದು ಈ ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಅರುಣ ಕಾರಜೋಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಣ್ಣಾ ಕಾತರಕಿ, ಗುರುಪಾದ ಕುಳಲಿ, ನಾಗಪ್ಪ ಅಂಬಿ, ಗೋಲಪ್ಪ ಗೋಲಶೆಟ್ಟಿ ಉಪಸ್ಥಿತರಿದ್ದರು.
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ